ಅಪ್ರಮೇಯ ಆದರಿಸೋ ಎನ್ನ

ಅಪ್ರಮೇಯ ಆದರಿಸೋ ಎನ್ನ


ಅಪ್ರಮೇಯ  ಆದರಿಸೋ ಎನ್ನ ||ಪ||
ಸ್ವಪ್ರಕಾಶಾನಂದರೂಪನೆ ||ಅ||

ಮುಪ್ಪುರಹರನುತ ಮುನಿಜನಸೇವಿತ
ತಪ್ಪುಗಳೆಣಿಸದೆ ದಾಸನೆಂತೆಂದು ||೧||

ನಿನ್ನದರುಶನದಿಂದಾ ಧನ್ಯರಾಗುವರು  ಜನರು
ಪುಣ್ಯವಂತರಾಗಿಹವರನ ಪಡೆವರು ||೨||

ಧಾರುಣಿಯೊಳಗೆ ಮಳೂರೊಳು ನೆಲಸಿದೆ
ಮಾರಜನಕ ಗುರುರಾಮವಿಠಲ ||೩||

--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು

 

ದಾಸ ಸಾಹಿತ್ಯ ಪ್ರಕಾರ
ಬರೆದವರು