ಅಂದೇ ನಿರ್ಣಯಿಸಿದರು

ಅಂದೇ ನಿರ್ಣಯಿಸಿದರು

( ರಾಗ ಮೋಹನ. ಆದಿ ತಾಳ) ಅಂದೇ ನಿರ್ಣಯಿಸಿದರು ಕಾಣೋ ಇಂದಿರಾಪತಿ ಪರದೈವವೆಂದು ||ಪ|| ಅಂದು ಚತುರ್ಮುಖ ನಾರದನಿಗೆ ತಮ್ಮ ತಂದೆ ಶ್ರೀಹರಿ ಪರದೈವವೆಂದು ಸಂದೇಹವ ಪರಿಹರಿಸಿದ ದ್ವಿತೀಯ ಸ್ಕಂಧದೊಳೈದಧ್ಯಾಯದಲಿ|| ವೇದೋಪಾಸ್ಯಕ ವೇದ ವಿಧಾಯಕ ವೇದಾತೀತಾನವನಂತೆ ವೇದಾಕ್ಷರಗಳು ಹರಿನಾಮಗಳೆಂದು ವೇದಾಂತ ಶ್ರುತಿಶಾಸ್ತ್ರಗಳಿಂದ || ಸಂದೇಹಾತ್ಮ ವಿನಾಶಸಹಿತನೆಂದು ಸ್ಕಂಧಗಳೆಲ್ಲ ಸಾರುತಿರೆ ತಂದೆ ಪುರಂದರವಿಠಲರಾಯನ ಸಂದೇಹವ ಬಿಟ್ಟು ತುತಿಸೆಲೊ ಮನುಜ ||
ದಾಸ ಸಾಹಿತ್ಯ ಪ್ರಕಾರ
ಬರೆದವರು