ಅಂತರಂಗದ ರೋಗ ಚಿಂತೆ ಪರಿಹರಿಸಿ

ಅಂತರಂಗದ ರೋಗ ಚಿಂತೆ ಪರಿಹರಿಸಿ

 

ಅಂತರಂಗದ  ರೋಗ ಚಿಂತೆ ಪರಿಹರಿಸಿ  ಮೋಕ್ಷ
ಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ||ಪ||
 
ಸುರರು ಅಸುರರು ಕೂಡಿ ಶರಧಿಯ ಮಥಿಸಲು
ಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ ||೧||
 
ಇಂದ್ರ ನೀಲಾಂಭ್ರಣಿ ಸನ್ನಿಭರೂಪ
ಚಂದ್ರಮಂಡಲದೊಳು ನಿಂತು ರಾಜಿಸುವಿ ||೨||
 
ಯೋಷಿತ ರೂಪದಿ ಸುಧೆಯನು ಕೊಟ್ಟು
ಪೋಷಿಸಿದೆಯೋ ಇಂದಿರೇಶ ದಿವಿಜರ  ||೩||
 
--ಪಾಂಡುರಂಗಿ ಹುಚ್ಚಾಚಾರ್ಯರು
ದಾಸ ಸಾಹಿತ್ಯ ಪ್ರಕಾರ
ಬರೆದವರು